WORK EXPERIENCE WORK SHOP
ನಮ್ಮ ಶಾಲೆಯಲ್ಲಿ WORK EXPIRIENCE ಭಾಗವಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು. ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಕೆ.ಎಸ್. ಸುರೇಶ್ ಅವರು ಗೆರೆಗಳಿಂದ ಚಿತ್ರರಚನೆ,ಥರ್ಮೋಕೋಲ್ ನಿಂದ ಬೊಂಬೆಗಳ ತಯಾರಿ ,ಅಕ್ಷರಚಂದವಾಗಿಸುವಿಕೆ ಇತ್ಯಾದಿ ವಿಚಾರಗಳನ್ನು ಬಹಳ ಚಂದವಾಗಿ ತಿಳಿಸಿಕೊಟ್ಟರು.ಕಾರ್ಯಾಗಾರವನ್ನು ಪಿ.ಟಿ.ಎ ಉಪಾಧ್ಯಕ್ಷರಾದ ಸಚ್ಚಿದಾನಂದ.ಎಸ್ ಅವರು ಉಧ್ಘಾಟಿಸಿದರು. ಕಾರ್ಯಕ್ರಮದ ಕೊನೆಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕ್ರಷ್ಣ ಭಟ್ ಅವರು ಸುರೇಶ್ ಅವರನ್ನು ಶಾಲುಹೊದಿಸಿ ಸನ್ಮಾನಿಸಿದರು.